ಬುದ್ಧನಾಗುವ ಬಯಕೆ

ಬುದ್ಧನಾಗಲಿಲ್ಲ ನಾ
ಕೇರಿಂದೆದ್ದು ಬರಲಾಗಲೇ ಇಲ್ಲ!
ಬಿದ್ದಲ್ಲೆ ಬಿದ್ದು ಬಿದ್ದು…
ಹಂದಿಯಂಗೆ ಹೊಲೆಗೇರಿಲಿ… ಎದ್ದು ಎದ್ದು…
ಒದ್ದಾಡುತ್ತಿರುವೆ!
ಕೇರಿಂದೆ ಹೊರಗೇ ಬರಲಾಗಲೇ ಇಲ್ಲ
ಇನ್ನು ಬುದ್ಧನಾಗುವಾ ಬಯಕೆ ದೂರಾಯಿತಲ್ಲ!
*

ಜಗವೆಲ್ಲ ಮಲಗಿರಲು
ಶತಶತಮಾನಗಳಿಂದಾ ಎದ್ದಿರುವೆವು ನಾವು!
ನಿದ್ದಿಲ್ಲದೆ, ಮನೆ, ಮಠ, ಸೂರಿಲ್ಲದೇ…
ಬುದ್ಧನಾಗುವ ಸಂಕಲ್ಪ ನಮಗುಂಟೇ?!
ಹೊಟ್ಟೆ, ಬಟ್ಟೆಗೆ,
ಆಸೆ ಪಟ್ಟು
ಕಟ್ಟು ನಿಟ್ಟಿಗೆ,
ಒಳಪಟ್ಟು
ಗತಿಗೆಟ್ಟವರೆಂಬಾಪಟ್ಟ,
ಗಿರಿಜನರೆಂಬಾಚಟ್ಟ
ನಮಗಲ್ಲದೆ, ಇನ್ಯಾರಿಗಿದೆ ಬುದ್ಧಾ…?!
*

ನಿತ್ಯ ಸಾವೆಂಬಾ ಅವಮಾನ!
ಕಂಗೆಟ್ಟ ಹಸಿವು,
ರೋಗರುಜಿನೆಂಬಾ ಹಾಸಿಗೆ
ಬಡತನವೆಂಬಾ ಸಂಕೋಲೆ
ಜಾತಿ, ಮತ, ಕುಲ, ಭೇದಗಳೆಂಬಾ ಕೆಂಭೂತ,
ಅನಕ್ಷರೆಂಬಾಭೂತ
ಸಂಸಾರವೆಂಬಾ ಪಿಶಾಚಿಗೆ,
ಬೇಸತ್ತರೂ ವೈರಾಗ್ಯವೆಂಬುದಿಲ್ಲ!
ಇನ್ನು ಬುದ್ಧನಾಗುವ ಬಯಕೆ…
ನಮಗೆಲ್ಲಿದೆ ಬುದ್ಧಾ?!
ದರಿದ್ರರೆಂಬಾ-ಪಟ್ಟ,
ಹರಿಜನರೆಂಬಾ-ಚಟ್ಟ,
ನಮಗಲ್ಲದೆ ಇನ್ಯಾರಿಗಿದೆ ಬುದ್ಧಾ?!
*

ನಿದ್ದಿಲ್ಲದೆ,
ಬುದ್ಧಿಲ್ಲದೆ,
ದುಡಿದ ದೇಹಕ್ಕಿಲ್ಲ ತುಂಡು ಬಟ್ಟೆ?!
ಬರುವಾಗ ಬೆತ್ತಲೆ
ಹೋಗುವಾಗ ಬೆತ್ತಲೆ
ದರಿದ್ರ ಜನರೆಂದು ಜರಿವಾಗ
ಬಾಹುಬಲಿಯೆಂಬಾಪಟ್ಟ,
ಹೊಲಗೇರಿಯವರೆಂಬಾಚಟ್ಟ
ನಮಗಲ್ಲದೆ, ಇನ್ಯಾರಿಗಿದೆ ಬುದ್ಧಾ…?!
*

ನಿತ್ಯ ಬೋಧಿ ವೃಕ್ಷದಾ ಕೆಳಗೆ!
ಮರ, ಗಿಡಗಳಾ ಆಸರೆಲಿ,
ನಿದ್ದಿಲ್ಲದೆ, ರಾತ್ರೆಲ್ಲ ಎದ್ದು,
ಬೋಧಿವೃಕ್ಷಕೆ, ತೊಟ್ಟಿಲ ಕಟ್ಟಿ, ತೂಗಿದರೂ…
ಬುದ್ಧನಾಗುವಾ ಯೋಗ, ನಮೆಗೆಲ್ಲಿದೆ ಬುದ್ಧಾ…?!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಗೆ ಹೇಳಲಿ
Next post ನಮ್ಮೂರ ಹೋಳಿ ಹಾಡು – ೪

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys